Home News ಜ.24-30: ನಾಳ ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೆ

ಜ.24-30: ನಾಳ ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೆ

ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 24ರಿಂದ ಜ. 30ರವರೆಗೆ ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯರವರ ಮಾರ್ಗದರ್ಶನದಲ್ಲಿ ವರ್ಷಾವಧಿ ಜಾತ್ರೆ ಜರಗಲಿರುವುದು.

ದಿನಾಂಕ 24-01-2026ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಹೊರೆಕಾಣಿಕೆ ಸಮರ್ಪಣೆ, ಪೂರ್ವಾಹ್ನ ಗಂಟೆ 11-30ರಿಂದ ಶ್ರೀದೇವರಿಗೆ ನವಕಪ್ರಧಾನ ಕಲಶಾಭಿಷೇಕ, ಮಹಾಪೂಜೆ. ಮಧ್ಯಾಹ್ನ ಗಂಟೆ 12-00ಕ್ಕೆ ಧ್ವಜಾರೋಹಣ, ನಿತ್ಯಬಲಿ. 12-30 ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 7-00ರಿಂದ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಮಹಾಪೂಜೆ ನಿತ್ಯಬಲಿ, ದೀಪದ ಬಲಿ, ರಾತ್ರಿ ಗಂಟೆ 7.00 ರಿಂದ: ಅಂಗನವಾಡಿ ಕೇಂದ್ರ ಗೋವಿಂದೂರು, ಅಂಗನವಾಡಿ ಕೇಂದ್ರ ಎರುಕಡಪು, ಅಂಗನವಾಡಿ ಕೇಂದ್ರ ಕೊಜಪ್ಪಾಡಿ. ಅಂಗನವಾಡಿ ಕೇಂದ್ರ ರಕ್ತಶ್ವರೀಪದವು, ಸ.ಕಿ.ಪ್ರಾ. ಶಾಲೆ ರಕೇಶ್ವರೀಪದವು, ಸರಕಾರಿ ಪ್ರೌಢಶಾಲೆ ಗೇರುಕಟ್ಟೆ ಹಾಗೂ ಸ್ಥಳೀಯರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’. ರಾತ್ರಿ ಗಂಟೆ 9-00 ರಿಂದ ಶ್ರೀ ಶಾರದೆ ತುಳುನಾಡು ಕಲಾವಿದೆರ್, ಬೆಳ್ತಂಗಡಿ ಇವರ ಅಭಿನಯದ ತುಳುನಾಡ ಬೊಳ್ಳಿ ಪದ್ಮನಾಭಮರಕಡ ವಿರಚಿತ ತುಳು ಹಾಸ್ಯ ನಾಟಕ ‘ಬೆರಿ ಪತ್ತೊಡ್ಡಿ’.

ದಿನಾಂಕ: 25-01-2026: ಬೆಳಿಗ್ಗೆ ಉಷಾಕಾಲ ಪೂಜೆ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ನಿತ್ಯಬಲಿ. ಮಧ್ಯಾಹ್ನ ಗಂಟೆ 12-30 ರಿಂದ: ಅನ್ನ ಸಂತರ್ಪಣೆ, ರಾತ್ರಿ ಗಂಟೆ 7-00 ರಿಂದ: ದೇವರ ಬಲಿ ಹೊರಟು ಕೆರೆಕಟ್ಟೆ ಉತ್ಸವ, ಮಹಾಪೂಜೆ – ನಿತ್ಯಬಲಿ, ದೀಪದ ಬಲಿ. ರಾತ್ರಿ ಗಂಟೆ 7-00 ರಿಂದ: ಅಂಗನವಾಡಿ ಕೇಂದ್ರ ನಾಳ ಹಾಗೂ ಸರಕಾರಿ ಹಿ.ಪ್ರಾ.ಶಾಲೆ ನಾಳ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ ಗಂಟೆ 8-00 ರಿಂದ ಕೇಸರಿ ಗೆಳೆಯರ ಬಳಗ ನಾಳ ಇದರ ಮೋಕೆದ ಕಲಾವಿದೆರ್ ಅಭಿನಯಿಸುವ, ದಿನಕರ ಭಂಡಾರಿ ಕಣಂಜಾರು ವಿರಚಿತ ತುಳು ನಾಟಕ ‘ಮದಿಮೆದ ಇಲ್ಲಲ್’.

ದಿನಾಂಕ: 26-01-2026: ಬೆಳಿಗ್ಗೆ ಉಷಾಕಾಲ ಪೂಜೆ. ಮಧ್ಯಾಹ್ನ ಗಂಟೆ 12.00ಕ್ಕೆ: ಮಹಾಪೂಜೆ – ನಿತ್ಯಬಲಿ. ಮಧ್ಯಾಹ್ನ ಗಂಟೆ 12-30ರಿಂದ: ಅನ್ನ ಸಂತರ್ಪಣೆ. ರಾತ್ರಿ ಗಂಟೆ 7-00 ರಿಂದ: ಶ್ರೀದೇವರ ಬಲಿ ಹೊರಟು, ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆಪೂಜೆ, ಪ್ರಸಾದ ವಿತರಣೆ, ಮಹಾಪೂಜೆ, ನಿತ್ಯಬಲಿ – ದೀಪದಬಲಿ, ರಾತ್ರಿ ಗಂಟೆ 7-00 ರಿಂದ: ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ, ಕೊರಂಜ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 8-30ರಿಂದ ಹಲವಾರು ಟಿ.ವಿ. ರಿಯಾಲಿಟಿ ಶೋಗಳಲ್ಲಿ ಮಿಂಚಿರುವ ಪ್ರತಿಭೆಗಳಿಂದ ಮತ್ತು ಹಿಸ್ ಬಾಯ್ಸ್ `ನತತಂಡ ಉಜಿರೆ ಅವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ

ದಿನಾಂಕ: 27-01-2026: ಬೆಳಿಗ್ಗೆ ಗಂಟೆ 9.00ರಿಂದ: ದೇವರ ಉತ್ಸವ ಬಲಿ ಹೊರಡುವುದು. ಮಧ್ಯಾಹ್ನ ಗಂಟೆ 12-15ಕ್ಕೆ : ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾಪೂಜೆ ಮಧ್ಯಾಹ್ನ ಗಂಟೆ 1-00 ರಿಂದ: ಮಹಾ ಅನ್ನ ಸಂತರ್ಪಣೆ. ಸಂಜೆ ಗಂಟೆ 5-00ಕ್ಕೆ: ಶ್ರೀ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಯುವುದು. ರಾತ್ರಿ ಗಂಟೆ 7-00ಕ್ಕೆ ರಥಕಲಶ, ರಾತ್ರಿ ಗಂಟೆ 9-00ರಿಂದ ದೇವರ ಉತ್ಸವ ಬಲಿ ಹೊರಟು ಉತ್ಸವ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ. ರಾತ್ರಿ ಗಂಟೆ 11-30ಕ್ಕೆ ಮಹಾರಥೋತ್ಸವ, ಶ್ರೀ ಭೂತಬಲಿ, ಕವಾಟ ಬಂಧನ. ರಾತ್ರಿ ಗಂಟೆ 7-00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 9-00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾನಸುರಭಿ ಉಜಿರೆ ತಂಡದಿಂದ ಭಕ್ತಿ ಭಾವ ಹಾಗೂ ಜನಪದ ಗೀತೆಗಳ ಸಂಗೀತ ಸಿಂಚನ.

ದಿನಾಂಕ 28-01-2026: ಬೆಳಿಗ್ಗೆ ಸುಲಗ್ನದಲ್ಲಿ ಕವಾಟೋದ್ಘಾಟನೆ, ದಿವ್ಯದರ್ಶನ, ಮಹಾಪೂಜೆ, ಚೂರ್ಣೋತ್ಸವ ಬಲಿ, ತುಲಾಭಾರ, ಕೊಡಿಮರಕ್ಕೆ ಜಾನುವಾರು ಒಪ್ಪಿಸುವುದು. ಮಧ್ಯಾಹ್ನ ಗಂಟೆ 12-30ಕ್ಕೆ ಅನ್ನ ಸಂತರ್ಪಣೆ. ರಾತ್ರಿ ಗಂಟೆ 7-00ರಿಂದ ದೇವರ ಬಲಿ ಹೊರಟು ಬಾಕಿಮಾರು ಗದ್ದೆಯಲ್ಲಿ ಪಿಲಿಚಾಮುಂಡಿ ದೈವದ ನೇಮ ಮತ್ತು ಗಗ್ಗರ ಸೇವೆ, ಅವಕೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ. ಸಂಜೆ ಗಂಟೆ 7-30ರಿಂದ ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಅಭಿನಯದ ಅನಂತ್ ಎಸ್. ಇರ್ವತ್ರಾಯ ತಂಗೋಯಿ ವಿರಚಿತ ತುಳು ಹಾಸ್ಯ ನಾಟಕ ‘ಕಾಶಿತೀರ್ಥ’.

ದಿನಾಂಕ 29-01-2026: ಬೆಳಿಗ್ಗೆ ಸಂಪ್ರೋಕ್ಷಣೆ, ಕಲಾಶಾಭಿಷೇಕ, ಮಹಾ ಮಂತ್ರಾಕ್ಷತೆ, ರಾತ್ರಿ ಗಂಟೆ 8-30ರಿಂದ ಊರ ಹವ್ಯಾಸಿ ಕಲಾವಿದರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರವಿಚಂದ್ರ ಬಿ. ಸಾಲಿಯಾನ್ ವಿರಚಿತ ತುಳು ಸಾಮಾಜಿಕ ನಾಟಕ ‘ಬಾಯಿ ಬುಡಿಯೆರ್ ಬಾಬಾಣ್ಣೆ’.

ದಿನಾಂಕ 30-01-2026: ರಾತ್ರಿ ಗಂಟೆ 7-00ರಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಊರ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ. ಹರೀಶ್ ಕುಮಾ‌ರ್ ತಿಳಿಸಿದ್ದಾರೆ