Mylara Lingeshwara Karnika 2023: ಇತಿಹಾಸ ಪ್ರಸಿದ್ದ ಹರಪನಹಳ್ಳಿ ದೊಡ್ಡಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೆ (Mylara Lingeshwara Karnika 2023)ಎರಡು ಬಾರಿ ಕಾರ್ಣಿಕ ನಡೆಯುವುದು ವಾಡಿಕೆ. ಇದು ಪಟ್ಟಣಕ್ಕೆ ಸಮೀಪದ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಪ್ಪ ನುಡಿದ ಕಾರ್ಣಿಕ ನುಡಿದಿದ್ದಾರೆ.
ಮೈಲಾರ ಲಿಂಗೇಶ್ವರ ದೇವಸ್ಥಾನದ ಕೋಟೆಪ್ಪ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದು, ‘ಮುತ್ತಿನ ಸದರಿಗೆ ಹಂಬಲದ ಅರಗಿಣಿ ಕೂತಿತಲೇ ಪರಾಕ್’ ಎಂದು ಭವಿಷ್ಯ ನುಡಿದಿದ್ದಾರೆ.ಮೈಲಾರ ಲಿಂಗೇಶ್ವರ ದೇವಸ್ಥಾನದ ಕೋಟೆಪ್ಪ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದು, ಧರ್ಮದರ್ಶಿ ದತ್ತಾತ್ರೇಯ ಭಟ್ ಈ ಕುರಿತು ವಿಶ್ಲೇಷಣೆ ನೀಡಿದ್ದಾರೆ. ‘ಲೋಕಸಭೆ ಚುನಾವಣೆಯಲ್ಲಿ ಜನಪರವಾಗಿರುವ ವ್ಯಕ್ತಿ ಅಧಿಕಾರಕ್ಕೆ ಗದ್ದುಗೆ ಹಿಡಿಯುತ್ತಾರೆ’ ಎಂದು ರಾಜಕಾರಣಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಮೈಲಾರ ಲಿಂಗೇಶ್ವರ ಭಕ್ತರು ಅವರನ್ನು ಎತ್ತಿ ಹಿಡಿದು ‘ಏಳು ಕೋಟಿ ಏಳು ಕೋಟಿ’ ಎಂದು ಉದ್ಘೋಷ ಮೊಳಗಿಸಿದ್ದಾರೆ. ಆನಂತರ, ಗೊರವಪ್ಪಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ಸರಪಳಿ ಪವಾಡ ಜರುಗಿದೆ.
ಇದನ್ನೂ ಓದಿ: Canara Bank: ಕೆನರಾ ಬ್ಯಾಂಕ್ ನಿವ್ವಳ ಲಾಭ ಏರಿಕೆ!!
