0
Bus Driver Death: ಚಲಿಸುತ್ತಿದ್ದ ಕೆಎಸ್’ಆರ್’ಟಿಸಿ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ (Bus Driver Death) ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ. ಮೃತರನ್ನು ಮುರಿಗೆಪ್ಪ ಅಥಣಿ ಎಂದು ಹೇಳಲಾಗಿದೆ.
ಚಾಲಕ ಅಥಣಿ ಅವರಿಗೆ ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತವಾದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್’ನತ್ತ ಚಲಿಸಿದೆ. ಇದನ್ನು ಗಮನಿಸಿದ ನಿರ್ವಾಹಕ ಚಾಲಕನತ್ತ ಹೋಗಿ, ಕುಸಿದು ಬಿದ್ದಿದ್ದ ಆತನನ್ನು ಸರಿಸಿ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಇದರಿಂದಾಗಿ ಆಗುತ್ತಿದ್ದ ಭಾರೀ ದೊಡ್ಡ ಅವಘಡ ತಪ್ಪಿ ಹೋಗಿದೆ. ಬಸ್ ಕಂಡೆಕ್ಟರ್ (ನಿರ್ವಾಹಕ) ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.
