Home » ಕುಲಾಲ ಯಾನೆ ಕುಂಬಾರ ಸಮುದಾಯದವರಿಗೆ ರಾಜ್ಯ ಮಟ್ಟದ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ

ಕುಲಾಲ ಯಾನೆ ಕುಂಬಾರ ಸಮುದಾಯದವರಿಗೆ ರಾಜ್ಯ ಮಟ್ಟದ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆ

by Praveen Chennavara
4 comments

ಪುತ್ತೂರು : ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ (ರಿ.) ವತಿಯಿಂದ ಕುಲಾಲ ಯಾನೆ ಕುಂಬಾರ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಗಳ ವಿವರ:

ಹೈಸ್ಕೂಲ್, ಕಾಲೇಜು ಹಾಗೂ ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ಹಾಗೂ 5 ಜನರಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಪ್ರಬಂಧ ಹಾಗೂ ಕಥೆಗಳು 3 ಪುಟಕ್ಕೆ ಮೀರದಂತಿರಬೇಕು.

ಪ್ರಬಂಧ ಸ್ಪರ್ಧೆಯ ವಿಷಯ:

banner

“ಸಾಮಾಜಿಕ ಸುಧಾರಣೆಯಲ್ಲಿ ಸರ್ವಜ್ಞನ ವಚನಗಳ ಮಹತ್ವ”

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಆಗಸ್ಟ್ ತಿಂಗಳ 30ರ ಒಳಗೆ ತಮ್ಮ ಹೆಸರು, ವಿಳಾಸ, ವಯಸ್ಸು, ವಿಭಾಗ, ಮೊಬೈಲ್ ಸಂಖ್ಯೆ, ಹಾಗೂ ವ್ಯಾಪ್ತಿಯ ಕುಲಾಲ ಅಥವಾ ಕುಂಬಾರ ಸಂಘದ ವಿವರಗಳೊಂದಿಗೆ ನೊಂದಾಯಿತ ಅಂಚೆಯ ಮೂಲಕ ಅಧ್ಯಕ್ಷರು/ಪ್ರಧಾನಕಾರ್ಯದರ್ಶಿ, ಕುಲಾಲ ಸಮಾಜ ಸೇವಾ ಸಂಘ ರಿ.,ಪುತ್ತೂರು ಸರಕಾರಿ ಆಸ್ಪತ್ರೆ ಬಳಿ, ಸೈನಿಕ ರಸ್ತೆ, ಪುತ್ತೂರು ತಾಲೂಕು, ದ.ಕ. 574201 ಇಲ್ಲಿಗೆ ಕಳಿಸುವುದು.

You may also like

Leave a Comment