Home » Belthangady : ಮರದ ಕೊಂಬೆ ಕಡಿಯುವಾಗ ಕರೆಂಟ್ ಶಾಕ್ – ವ್ಯಕ್ತಿ ಸಾವು!!

Belthangady : ಮರದ ಕೊಂಬೆ ಕಡಿಯುವಾಗ ಕರೆಂಟ್ ಶಾಕ್ – ವ್ಯಕ್ತಿ ಸಾವು!!

0 comments

Belthangady : ಮರದ ಗೊಂಬೆಯನ್ನು ಕಡಿಯುವಾಗ ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿಯ ಕಸಬಾ ಗ್ರಾಮದ ಪುಂಡಿಕ್ಕು ಎಂಬಲ್ಲಿ ಎ.3ರಂದು ಚನನ ಗೌಡ (69) ಎಂಬುವವರು ಖಾಸಗಿ ಜಮೀನಿನಲ್ಲಿ ಮರದ ಗೆಲ್ಲು ಕಡಿಯುತ್ತಿದ್ದಾಗ ಗೆಲ್ಲು 11 ಕೆವಿ ಕುವೆಟ್ಟು ಫೀಡರ್‌ನ ಎಚ್‌ಟಿ ಲೈನ್‌ಗೆ ಬಿದ್ದು, ಕರೆಂಟ್ ಶಾಕ್ ಹೊಡೆದು ಅವರು ಸಾವನ್ನಪ್ಪಿದ್ದಾರೆ.

ಮರದಿಂದ ಬಿದ್ದಿದ್ದ ಅವರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮರ ಕಡಿಯಲು ಅವರು ಮೆಸ್ಕಾಂನಿಂದ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.

You may also like