Home News ಆಸ್ತಿಯ ದುರಾಸೆಗಾಗಿ ತನ್ನ ಸಹೋದರರ ಜೊತೆಗೂಡಿ ಪತ್ನಿಯನ್ನೇ ಕೊಂದ ಪತಿ

ಆಸ್ತಿಯ ದುರಾಸೆಗಾಗಿ ತನ್ನ ಸಹೋದರರ ಜೊತೆಗೂಡಿ ಪತ್ನಿಯನ್ನೇ ಕೊಂದ ಪತಿ

Hindu neighbour gifts land to Muslim journalist

Hindu neighbor gifts plot of land

ಆಸ್ತಿ ಹಂಚಿಕೆ ವಿವಾದದಿಂದ ಸಹೋದರರ ಜೊತೆಗೂಡಿ, ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಇಂದು ನಡೆದಿದೆ.

ರಹಮಾನ್ ಈ ಹತ್ಯೆಯ ಪ್ರಮುಖ ಆರೋಪಿ. ರೇಷ್ಮಾ ರಹಮಾನ್ ತಾಸೆವಾಲೆ ಮೃತಪಟ್ಟ ಮಹಿಳೆ.

ಆಸ್ತಿಯ ಪಾಲಿನ ವಿಚಾರವಾಗಿ ಆರಂಭವಾದ ವಾದ-ವಿವಾದಗಳಿಂದ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಗಲಾಟೆ ಹೆಚ್ಚಾಗುತ್ತಾ ಕೊನೆಗೆ ಅದು ಕೊಲೆಯ ಮೂಲಕ ಅಂತ್ಯ ಕಂಡಿದೆ. ರಹಮಾನ್ ರಾಡ್‌ನಿಂದ ಹೊಡೆದು ರೇಷ್ಮಾಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮೃತಳ ಪತಿ ರಹಮಾನ್ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.