Ayushman Bhava: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವು ಈ ವರ್ಷ ಸಾಮಾನ್ಯ ಜನರಿಗೆ ತುಂಬಾ ವಿಶೇಷವಾಗಿರಲಿದೆ. ವಾಸ್ತವವಾಗಿ, ಕೇಂದ್ರವು ಆಯುಷ್ಮಾನ್ ಭವ (Ayushman Bhava) ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಅಂದರೆ ಪ್ರಧಾನಿ ಮೋದಿಯವರ ಜನ್ಮದಿನದಂದು ಪ್ರಾರಂಭಿಸಲಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನಾವು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಕ್ಷಯರೋಗ (ಟಿಬಿ) ಸಮಸ್ಯೆಗೆ ಒತ್ತು ನೀಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಪ್ರತಿ ತಿಂಗಳು ಪೌಷ್ಟಿಕಾಂಶದ ಕಿಟ್ಗಳನ್ನು ನೀಡಲಾಗುತ್ತಿದ್ದು, ಆ ರೋಗಿಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದು ಮಾಂಡವೀಯ ಹೇಳಿದರು. ‘ಜನರ ಸಹಭಾಗಿತ್ವ’ದಿಂದ ಟಿಬಿಯನ್ನು ದೇಶದಿಂದ ತೊಲಗಿಸುವ ವಿಶ್ವಾಸ ನಮಗಿದೆ ಎಂದರು.
ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾಗಿದೆ, ಇದು ಪ್ರತಿ ಫಲಾನುಭವಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಪ್ರತಿಯೊಬ್ಬ ಉದ್ದೇಶಿತ ಫಲಾನುಭವಿಗೆ ಸರ್ಕಾರದ ಎಲ್ಲಾ ಆರೋಗ್ಯ ಯೋಜನೆಗಳನ್ನು ತಲುಪಲು ಆರೋಗ್ಯ ಸಚಿವಾಲಯವು ಆಯುಷ್ಮಾನ್ ಭವ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ ಎಂದು ಮಾಂಡವಿಯಾ ಹೇಳಿದರು. ಈ ಕಾರ್ಯಕ್ರಮದಲ್ಲಿ ಶಿಬಿರಗಳನ್ನು ಆಯೋಜಿಸಿ 60,000 ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೀಡಲಾಗುವುದು.
2030 ರೊಳಗೆ ಕ್ಷಯರೋಗವನ್ನು (TB)ಯನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದೇವೆ, ಇದುವೇ ವಿಶ್ವದ ಗುರಿ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ 2025 ರೊಳಗೆ ಟಿಬಿಯನ್ನು ತೊಡೆದು ಹಾಕುವುದು ಭಾರತದ ಗುರಿಯಾಗಿದೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಅವರು ಹೇಳಿದರು.
ಉತ್ತರ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ಗುಜರಾತ್ನ ವಡ್ನಗರದಲ್ಲಿ 1950 ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಜನಿಸಿದ್ದು, ಅವರ ಹುಟ್ಟಿದ ಸಂದರ್ಭ ಈ ರೀತಿಯ ಕಾರ್ಯಕ್ರಮ ಅದು ಕೂಡಾ ಆರೋಗ್ಯಕ್ಕೆ ಸಂಬಂಧಿಸುವ ಯೋಜನೆ ಕೈಗೊಳ್ಳುವುದು ಗಮನಾರ್ಹ ವಿಷಯವಾಗಿದೆ.
ಇದನ್ನೂ ಓದಿ: Teachers Recruitment 2023: ಶಿಕ್ಷಕರ ಹುದ್ದೆಗೆ ಬಂಪರ್ ನೇಮಕಾತಿ; 20 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!!!
