Home » ಪುತ್ತೂರು : ಕಲ್ಲರ್ಪೆಯಲ್ಲಿ ಲಾರಿ-ಸ್ಕೂಟರ್ ಡಿಕ್ಕಿ,ಇಬ್ಬರಿಗೆ ಗಂಭೀರ ಗಾಯ

ಪುತ್ತೂರು : ಕಲ್ಲರ್ಪೆಯಲ್ಲಿ ಲಾರಿ-ಸ್ಕೂಟರ್ ಡಿಕ್ಕಿ,ಇಬ್ಬರಿಗೆ ಗಂಭೀರ ಗಾಯ

by Praveen Chennavara
0 comments

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪ್ಯ ಮತ್ತು ಕಲ್ಲರ್ಪೆ ನಡುವೆ ಫೆ.3ರ ರಾತ್ರಿ ಅಪಘಾತ ಸಂಭವಿಸಿದೆ.

ಬೆಟ್ಟಂಪಾಡಿ ನಿವಾಸಿಗಳಾದ ಸ್ಕೂಟರ್ ಸವಾರ ಪ್ರಮೋದ್ ಗಾಯಗೊಂಡಿದ್ದು, ಸಹಸವಾರೆ ಭಾಗ್ಯಲಕ್ಷ್ಮೀ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾರೆ

ಪುತ್ತೂರು ಕಡೆಯಿಂದ ಸುಳ್ಯ ಮಾರ್ಗವಾಗಿ ಹೋಗುತ್ತಿದ್ದ ಲಾರಿ ಮತ್ತು ಅದೆ ರಸ್ತೆಯಾಗಿ ಹೋಗುತ್ತಿದ್ದ ಸ್ಕೂಟರ್ ನಡುವೆ ಸಂಪ್ಯ ಮತ್ತು ಕಲ್ಲರ್ಪೆ ನಡುವಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸಹಸವಾರೆ ಬೆಟ್ಟಂಪಾಡಿ ಕಾನುಮೂಲೆ ನಿವಾಸಿ ಹರಿನಾರಾಯಣ ಭಟ್ ಅವರ ಪುತ್ರಿ ಬೆಟ್ಟಂಪಾಡಿ ಕಾಲೇಜು ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಅವರು ಕಾಲು ಮುರಿತಗೊಂಡು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ಸಂಬಂಧಿಕ ಪ್ರಮೋದ್ ಅವರನ್ನು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

You may also like

Leave a Comment