Home » Yatnal: ಕೇರಳದಲ್ಲಿ ಯಾಗ ಮಾಡಿದ್ದಕ್ಕೆ ಸಿದ್ದುಗೆ ಕಾಲು ನೋವು-ಯತ್ನಾಳ್‌ ಸ್ಫೋಟಕ ಮಾಹಿತಿ

Yatnal: ಕೇರಳದಲ್ಲಿ ಯಾಗ ಮಾಡಿದ್ದಕ್ಕೆ ಸಿದ್ದುಗೆ ಕಾಲು ನೋವು-ಯತ್ನಾಳ್‌ ಸ್ಫೋಟಕ ಮಾಹಿತಿ

0 comments
Basavanagouda yatnal

Yatnal: ಕೇರಳದಲ್ಲಿ ನಾಯಕರೊಬ್ಬರು ಶತ್ರು ಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರಿಗೆ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದರು.

ಭಾನುವಾರ ಇಲ್ಲಿನ ಮೂರುಸಾವಿರ ಮಠದ ಡಾ.ಗುರು ಸಿದ್ಧರಾಜ ಯೋಗೀಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಅವರು ಮಾತನಾಡಿದರು. ‘ಕೇರಳದ ಶತ್ರುಸಂಹಾರ ಯಾಗಕ್ಕೂ, ಸಿದ್ದರಾಮಯ್ಯನವರ ಕಾಲಿನ ಸಮಸ್ಯೆಗೂ ಸಂಬಂಧವಿದೆ. ನನ್ನ ಮೇಲೆ ಕೂಡ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯತ್ನಾಳ ಸಂಹಾರ ಪೂಜೆ ನಡೆದಿದೆ. ಆದರೆ, ನನಗೆ ಏನೂ ಆಗಲ್ಲ. ಏಕೆಂದರೆ ಮಾಟ, ಮಂತ್ರ ನನ್ನ ಮೇಲೆ ಪ್ರಭಾವ ಬೀರಲ್ಲ ಎಂದು ನನ್ನ ಜಾತಕದಲ್ಲಿದೆ’ ಎಂದರು.

‘ಈ ಹಿಂದೆ ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿಯೂ ಕೂಡ ನನ್ನ ಸಂಹಾರ ಪೂಜೆ ಆಗಿದೆ. ಪೂಜೆ ಮಾಡಿಸಿದ್ದು ಯಾರೆಂಬುದು ನನಗೆ ಗೊತ್ತಿದೆ’ ಎಂದು ಯತ್ನಾಳ್ ಹೇಳಿದರು.

You may also like