1
Bengaluru: ಕೆಲವು ದಿನಗಳ ಹಿಂದೆ ತನ್ನ ಪತ್ನಿಯನ್ನು ಕಳೆದುಕೊಂಡ 85 ವರ್ಷದ ಮಂಚಳ್ಳಿ ಗ್ರಾಮದ ನಿವಾಸಿ ಬಿ.ಕೆ. ಪೊನ್ನಪ್ಪ ಎಂಬುವವರು ಮಾನಸಿಕ ಸ್ಥಿಮತೆಯನ್ನು ಕಳೆದುಕೋಡು ಟಿ. ಶೆಟ್ಟಿಗೇರಿ, ಶ್ರೀಮಂಗಲ ಬೀದಿಯಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದ ಸಮಾಜ ಸೇವಕರಾದ ಎಂ.ಟಿ. ಕಾರ್ಯಪ್ಪ ಹಾಗೂ ಸಂಗಡಿಗರು ಅವರನ್ನು ಬೆಂಗಳೂರಿನ (Bengaluru) ಆಸರೆ ಅನಾಥ ಆಶ್ರಮಕ್ಕೆ ದಾಖಲಿಸಿದ್ದಾರೆ.
ಈ ನಿಟ್ಟಿನಲ್ಲಿ ಸಮಾಜಸೇವಕಿ ಪಡಿಕಲ್ ಕುಸುಮಾವತಿ, ಎ.ಪಿ. ಮೋಟಯ್ಯ, ಗ್ರಾಮ ಪಂಚಾಯತಿ ಪಿ.ಡಿ.ಓ. ಸತೀಶ್ ಅವರು ಸಹಕಾರ ನೀಡಿದ್ದಾರೆ.
