Home » Subrahmanya: ಸುಬ್ರಹ್ಮಣ್ಯ: ನದಿಗೆ ತೆರಳಿದ್ದ ಇಬ್ಬರು ನೀರು ಪಾಲು

Subrahmanya: ಸುಬ್ರಹ್ಮಣ್ಯ: ನದಿಗೆ ತೆರಳಿದ್ದ ಇಬ್ಬರು ನೀರು ಪಾಲು

A+A-
Reset

Subrahmanya: ಕುಮಾರಧಾರ‌ ನದಿಗೆ‌ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಕುಲ್ಕುಂದ ಎಂಬಲ್ಲಿ ಇಂದು (ಭಾನುವಾರ)ಮಧ್ಯಾಹ್ನ ನಡೆದಿದೆ.

ಮೃತರನ್ನು ಸುಬ್ರಹ್ಮಣ್ಯದಲ್ಲಿ ಉದ್ಯಮ ನಡೆಸುತ್ತಿರುವ ಕೊಲ್ಲಮೊಗ್ರದ ಹರಿಪ್ರಸಾದ್ ಹಾಗೂ ಮತ್ತೋರ್ವ ಯುವಕನನ್ನು ಸುಜೀತ್ ಕೊಲ್ಲಮೊಗ್ರ ಎಂದು ಗುರುತಿಸಲಾಗಿದೆ. ಇವರಿಬ್ಬರೂ ನದಿಗೆ ಈಜಲು‌ ತೆರಳಿರುವ ವೇಳೆ ಮುಳುಗಿ ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು ನಿಖರ ಕಾರಣ ತಿಳಿದುಬಂದಿಲ್ಲ.