Home » ಉರಿ ಬಿಸಿಲಿನಿಂದ ದಣಿದ ಜೀವಗಳಿಗೆ ಪುಟ್ಟ ಬಾಲಕ ಮಾಡಿದ ದೊಡ್ಡ ಕಾರ್ಯ!

ಉರಿ ಬಿಸಿಲಿನಿಂದ ದಣಿದ ಜೀವಗಳಿಗೆ ಪುಟ್ಟ ಬಾಲಕ ಮಾಡಿದ ದೊಡ್ಡ ಕಾರ್ಯ!

0 comments

ಕಷ್ಟ ಎಂದವನ ಹೆಗಲಿಗೆ ಹೆಗಲಾಗುವವನೇ ನಿಜವಾದ ಮಾನವ.ಇಂತಹ ಉರಿಬಿಸಿಲಿನಲ್ಲಿ ಸೋತು ಬಾಯಾರಿಕೆಯಲ್ಲಿ ದಣಿದವರಿಗೆ ಒಂಚೂರು ನೀರು ನೀಡಿದರೆ ಅವರ ಆಶೀರ್ವಾದಕ್ಕಿಂತ ಉತ್ತಮ ಬೇರೊಂದಿಲ್ಲ ಅಲ್ವಾ!?.ಹೌದು. ಇಂತಹ ಒಂದು ಉತ್ತಮ ಕೆಲಸ ಮಾಡಿ ಈ ಪುಟ್ಟ ಬಾಲಕನಿಗೆ ದೊರೆತ ಬ್ಲೆಸಿಂಗ್ ನೋಡಿ.

ಸಹಾಯ ಮಾಡಬೇಕೆಂದರೆ ವಯಸ್ಸಿನ ಅವಶ್ಯಕತೆಯಿರುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಉದಾಹರಣೆಯಂತಿದ್ದು,ಈ ಬಾಲಕನ ಕಾರ್ಯ ಇಂದಿನ ಪೀಳಿಗೆಗೆ ಮಾದರಿ ಎಂಬಂತಿದೆ. ದುಡ್ಡಿದ್ದರೆ ಸ್ವಲ್ಪವೂ ದಾನ ಮಾಡದೆ, ಸ್ವಾರ್ಥಕ್ಕಾಗಿ ಬದುಕುವ ಕೆಲವು ಜನರ ಮಧ್ಯೆ ಬಾಲಕನ ಮಾನವೀಯ ಕಾರ್ಯ ಮೆಚ್ಚುವಂತದ್ದೇ.ಅಷ್ಟಕ್ಕೂ ಆ ಪುಟ್ಟ ಬಾಲಕನ ದೊಡ್ಡ ಕೆಲಸ ನೀವೇ ನೋಡಿ.

ಅಯಾನ್ ಎಂಬ ಪುಟ್ಟ ಬಾಲಕ ಬೀದಿ ಬದಿ ತರಕಾರಿ, ಹಣ್ಣು ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ಜನರಿಗೆ ನೀರಿನ ಬಾಟಲಿಯನ್ನು ನೀಡಿದ್ದಾನೆ.ಈ ಮೂಲಕ ದಾಹ ನೀಗಿಸಿ ಮಾನವೀಯತೆ ಮೆರೆದಿದ್ದಾರೆ.ಬಾಲಕನ ಈ ಕಾರ್ಯಕ್ಕೆ ಮನಸೋತ ಅಜ್ಜಿಯೊಬ್ಬರು ಆತನಿಗೆ ಆಶೀರ್ವಾದವನ್ನು ಸಹ ಮಾಡಿದ್ದು,ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನು ಐಎಎಸ್‌ ಅಧಿಕಾರಿ ಅವನೀಶ್‌ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, 2 ಗಂಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಮೆಚ್ಚುಗೆ ಸೂಚಿಸಿ ಕಮೆಂಟ್‌ ಜೊತೆಗೆ ಲೈಕ್‌ಗಳನ್ನು ಸಹ ಮಾಡಿದ್ದಾರೆ.

You may also like

Leave a Comment