Home » Nithin Ghadkari : ‘ಜನರನ್ನು ಮರಳು ಮಾಡುವವನೇ ಅತ್ಯುತ್ತಮ ನಾಯಕ’ – ನಿತಿನ್ ಗಡ್ಕರಿ ಹೇಳಿಕೆ, ವಿವಾದ ಸೃಷ್ಟಿ

Nithin Ghadkari : ‘ಜನರನ್ನು ಮರಳು ಮಾಡುವವನೇ ಅತ್ಯುತ್ತಮ ನಾಯಕ’ – ನಿತಿನ್ ಗಡ್ಕರಿ ಹೇಳಿಕೆ, ವಿವಾದ ಸೃಷ್ಟಿ

0 comments

Nithin Ghadkari : ಬಿಜೆಪಿ ನಾಯಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಕೆಲಸಗಳಿಗೆ ಮಾತ್ರವಲ್ಲದೆ ತಮ್ಮ ನೇರ ನಡೆ-ನುಡಿಗಳಿಂದಲೇ ಹೆಸರುವಾಸಿಯಾದವರು. ಇದೀಗ ಅವರು ಅಚ್ಚರಿ ಹೇಳಿಕೆಯನ್ನು ನೀಡಿದ್ದು ಯಾವ ನಾಯಕ ಜನರನ್ನು ಮರಳು ಮಾಡುತ್ತಾನೆ ಅವನೇ ಅತ್ಯುತ್ತಮನೆನಿಸುತ್ತಾನೆ ಎಂದು ಹೇಳಿದ್ದಾರೆ.

ಸೋಮವಾರ ಅಖಿಲ ಭಾರತೀಯ(India) ಮಹಾನುಭವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಜನರನ್ನು ಮರಳು ಮಾಡುವವನೇ ಅತ್ಯುತ್ತಮ ನಾಯಕ ಎಂದಿದ್ದಾರೆ. ತಮಾಷೆಯ ಶೈಲಿಯಲ್ಲಿ ಮಾತನಾಡಿದ ಗಡ್ಕರಿ, ರಾಜಕೀಯದಲ್ಲಿ ಅಸಮಾಧಾನಕಾರಿ ಸತ್ಯ ಹೇಳುವುದು ಬಹುಪಾಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಕೆಲಸ ಮಾಡುವ ಕ್ಷೇತ್ರದಲ್ಲಿ, ನನ್ನ ಹೃದಯದಿಂದ ಸತ್ಯವನ್ನು ಮಾತನಾಡುವುದನ್ನು ನಿಷೇಧಿಸಲಾಗಿದೆ. ಜನರನ್ನು ಅತ್ಯುತ್ತಮವಾಗಿ ಮರುಳು ಮಾಡಬಲ್ಲವನೇ ಅತ್ಯುತ್ತಮ ನಾಯಕ ಎಂದರು. ಸಧ್ಯ ಇದು ವಿವಾದಕ್ಕೆ ಕಾರಣವಾಗಿದೆ.

NEET-UG exam: ಕಟ್ಟಡ ಕಾರ್ಮಿಕ ಕನಸು ನನಸು: ನೀಟ್-ಯುಜಿ ಪರೀಕ್ಷೆಯಲ್ಲಿ ಸೀಟು ಗಿಟ್ಟಿಸಿಕೊಂಡ ರೈತನ ಮಗ

You may also like