Home » Thiruvananthapuram: ಹಬ್ಬದ ಆಚರಣೆ ವೇಳೆ ದೇಗುಲಗಳಲ್ಲಿ ಆನೆ ಬಳಕೆ; ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

Thiruvananthapuram: ಹಬ್ಬದ ಆಚರಣೆ ವೇಳೆ ದೇಗುಲಗಳಲ್ಲಿ ಆನೆ ಬಳಕೆ; ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

0 comments

Tiruvananthapuram: ಕೇರಳದ ದೇಗುಲಗಳಲ್ಲಿ ಹಬ್ಬದ ಆಚರಣೆ ವೇಳೆ ಆನೆಗಳನ್ನು ಬಳಸುವ ಪದ್ಧತಿ ಬಗ್ಗೆ ಕೇರಳ ಹೈಕೋರ್ಟ್‌ ಜನವರಿಯಲ್ಲಿ ನೀಡಿದ್ದ ಆದೇಶದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

2025 ಜ.13 ರಂದು ಹೈಕೋರ್ಟ್‌ ಜಿಲ್ಲಾ ಸಮಿತಿಗಳಲ್ಲಿ ನೋಂದಣಿಯಾಗದ ದೇವಾಲಯಗಳು ಹಬ್ಬಗಳ ಆಚರಣೆಯಲ್ಲಿ ಆನೆಗಳನ್ನು ಬಳಸಕೂಡದು, ಆನೆಗಳ ಮೆರವಣಿಗೆಯಲ್ಲಿ ನಿರ್ದಿಷ್ಟ ಅಂತರ ಅನುಸರಿಸಲು ಮಾರ್ಗಸೂಚಿ ರಚಿಸಬೇಕು ಎನ್ನುವ ನಿರ್ದೇಶನಗಳಿರುವ ಆದೇಶವನ್ನು ಹೊರಡಿಸಿತ್ತು.

ಈ ಕುರಿತು ಪ್ರಶ್ನೆ ಮಾಡಿದ ವಿಶ್ವ ಗಜ ಸೇವಾ ಸಮಿತಿ ಸುಪ್ರೀಂ ಮೆಟ್ಟಿಲೇರಿತ್ತು. ಇದರ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ಆದೇಶಕ್ಕೆ ತಡೆ ನೀಡಿರುವ ಕುರಿತು ವರದಿಯಾಗಿದೆ.

You may also like