5
Udupi: ಉಡುಪಿ (Udupi) ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನು ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ರಕ್ಷಿಸಲಾಯಿತು.

ರಕ್ಷಿಸಲ್ಪಟ್ಟಿರುವ ಬಾಲಕಿಯರನ್ನು ನಿಟ್ಟೂರು ಬಾಲಕೀಯರ ಬಾಲ ಭವನದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ.
ರಕ್ಷಿಸಲ್ಪಟ್ಟ ಬಾಲಕೀಯರು ನಿಟ್ಟೂರು ಮಧ್ವರಾಜ ನಗರದ ಕಾಲೋನಿಯ ನಿವಾಸಿಗಲಾಗಿದ್ದು 13 ವರ್ಷದ ಬಾಲಕಿ 7 ನೇ ತರಗತಿ, ಹಾಗೂ 10 ವರ್ಷದ ಬಾಲಕಿ 5 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.
