Home News ಉದ್ಯಾವರದ ಜಯಲಕ್ಷ್ಮೀ ವಸ್ತ್ರ ಮಳಿಗೆಯ ಸಂಸ್ಥಾಪಕಿ ಗೀತಾ ವಿ.ಹೆಗ್ಡೆ ನಿಧನ

ಉದ್ಯಾವರದ ಜಯಲಕ್ಷ್ಮೀ ವಸ್ತ್ರ ಮಳಿಗೆಯ ಸಂಸ್ಥಾಪಕಿ ಗೀತಾ ವಿ.ಹೆಗ್ಡೆ ನಿಧನ

ಉಡುಪಿಯ ಪ್ರಸಿದ್ಧ ಜವುಳಿ ಅಂಗಡಿ, ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆಯ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ (70 ) ಅವರು ಉದ್ಯಾವರ ಗುಡ್ಡೆಯಂಗಡಿಯ ತನ್ನ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ.

52 ವರ್ಷಗಳ ಹಿಂದೆ ಉದ್ಯಾವರದಲ್ಲಿ ಪತಿ ಎನ್. ವಾಸುದೇವ ಹೆಗ್ಡೆ ಜೊತೆಯಲ್ಲಿ ಜಯಲಕ್ಷ್ಮೀ ವಸ್ತ್ರ ಮಳಿಗೆ ಸ್ಥಾಪಿಸಿದ್ದರು. ಇದೀಗ ಈ ಮಳಿಗೆ ರಾಜ್ಯಾದ್ಯಂತ ಜನಪ್ರಿಯಗೊಂಡಿದೆ.

ಮೃತರು ಉದ್ಯಾವರ ಜಯಲಕ್ಷ್ಮೀ ಜವುಳಿ ಮಳಿಗೆ ಮಾಲಕರಾದ ಪುತ್ರರಾದ ವೀರೇಂದ್ರ ಹೆಗ್ಡೆ ಮತ್ತು ರವೀಂದ್ರ ಹೆಗ್ಡೆ , ಪುತ್ರಿ ವೀಣಾ ಹೆಗ್ಡೆ ಅವರನ್ನು ಅಗಲಿದ್ದಾರೆ.