Home » ವೇಣೂರು: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹತ್ತೊಂಬತ್ತರ ಯುವಕ!! ಸಾವಿಗೆ ಕಾರಣ ನಿಗೂಢ-ಠಾಣೆಯಲ್ಲಿ ಪ್ರಕರಣ ದಾಖಲು

ವೇಣೂರು: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹತ್ತೊಂಬತ್ತರ ಯುವಕ!! ಸಾವಿಗೆ ಕಾರಣ ನಿಗೂಢ-ಠಾಣೆಯಲ್ಲಿ ಪ್ರಕರಣ ದಾಖಲು

0 comments

ವೇಣೂರು: ಇಲ್ಲಿನ ಅಡಿಂಜೆ ಎಂಬಲ್ಲಿಯ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಕಿಲಾರ ನಿವಾಸಿ ವೆಂಕಪ್ಪ ಮಲೆಕುಡಿಯ ಎಂಬವರ ಪುತ್ರ ಪುನೀತ್(19) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಪುನೀತ್ ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲಸದ ನಿಮಿತ್ತ ತಂಗಿದ್ದರು. ಆದರೆ ಮಂಗಳವಾರ ರಾತ್ರಿ ಊಟದ ಬಳಿಕ ತಾನು ತಂಗಿದ್ದ ಕೊಠಡಿಯ ಟೇರಿಸ್ ಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಲಿದ್ದು, ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆತ್ಮೀಯ ಗೆಳೆಯನ ಸಾವಿಗೆ ಆತನ ಗೆಳೆಯರು ಕಂಬನಿ ಮಿಡಿದಿದ್ದಾರೆ.

You may also like

Leave a Comment