0
Kodagu: ವಿರಾಜಪೇಟೆ ಸಮೀಪ ಪೊದುಮಾನಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ಯುವಕನ ದುರ್ಮರಣವಾಗಿದೆ.
ಹೆಚ್.ಸಿ.ಲೋಹಿತ್( 32) ಎಂಬಾತ ಕಾಫಿ ಕೊಯ್ಯುವ ಸಂಧರ್ಭದಲ್ಲಿ ಹೆಜ್ಜೇನು ದಾಳಿ ನಡೆಸಿರುವುದಾಗಿದೆ. ಇಂದು ಮುಂಜಾನೆ ಸ್ಥಳಿಯರು ಹುಡುಕಾಟ ನಡೆಸುತ್ತಿದ್ದ ವೇಳೆಯಲ್ಲಿ ಕಾಫಿ ತೋಟದಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
