BBMP : ಬೆಂಗಳೂರು ಮಹಾ ಮಳೆಗೆ ಅಂಡರ್ ಪಾಸ್ನಲ್ಲಿ ನೀರು ತುಂಬಿ ಅಮಾಯಕರ ಜೀವ ಬಲಿ ತೆಗೆದುಕೊಂಡ ಬೆನ್ನಲ್ಲೆ ಅಂಡರ್ಪಾಸ್ಗಳಿಗೆ ಹೈಟೆಕ್ ಟಚ್ ನೀಡಲು ಬಿಬಿಎಂಪಿ (BBMP) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಬಂದ್ರೆ ಸಾಕು ಅನಾಹುತ ಸಂಭವಿಸುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ದೆಹಲಿಯ ಮಾದರಿಯಲ್ಲಿ ಅಂಡರ್ ಪಾಸ್ಗಳನ್ನು ನಿರ್ಮಿಸಬೇಕು ನಿರ್ಮಿಸಿದಲ್ಲಿ ಇಂತಹ ಅವಘಡ ಸಂಭವಿಸುವುದಿಲ್ಲ.
ನಗರದ ಬಹುತೇಕ ಅಂಡರ್ ಪಾಸ್ಗಳಲ್ಲಿ ಮಳೆ ಬಂದಾಗೆಲ್ಲ ನೀರು ಶೇಖರಣೆ ಗೊಳ್ಳುತ್ತದೆ ಇದರಿಂದಲೇ ಸಮಸ್ಯೆ ಎದುರಾಗುತ್ತದೆ ಇಂಗು ಗುಂಡಿ ನಿರ್ಮಾಣಕ್ಕೆ ಮುಂದಾಗಲಿದೆ. ಅಲ್ಲದೇ ಅಂಡರ್ ಪಾಸ್ಗಳನ್ನು ನಿಗಾವಹಿಸಲು ಸಿಸಿಟಿವಿಯನ್ನು ಅಳವಡಿಕೆ ಮಾಡಲಾಗುತ್ತದೆ. ಹೆವಿ ಡ್ಯೂಟಿ ಸಾಮರ್ಥ್ಯದ ಮೋಟಾರ್ ಅಳವಡಿಸುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: Opposition leader : ಸಿಎಂ ಆಯ್ಕೆಗಿಂತಲೂ ಕಗ್ಗಂಟಾಯ್ತು ವಿಪಕ್ಷ ನಾಯಕನ ಆಯ್ಕೆ! ಬಿಜೆಪಿ ಪಾಳಯದಲ್ಲಿ ಬಗೆಹರಿಯದ ಗೊಂದಲ!!
