ಭಾಗೀರಥಿ ಮುರುಳ್ಯ ಆಯ್ಕೆ ಮಾಡಿ ಘನತೆ ಹೆಚ್ಚಿಸಿಕೊಂಡ ಬಿಜೆಪಿ

Bhagirathi Murulya: ಆಕೆ ಕೂಲಿ ಕೆಲಸದ ಹೆಂಗಸು. ಇವತ್ತು ಆಕೆ ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಭಾಗೀರಥಿ ಮುರುಳ್ಯ (Bhagirathi Murulya) ಕೇವಲ ಇವರ ಪಕ್ಷ ನಿಷ್ಠೆ, ರಾಷ್ಟ್ರೀಯ ವಿಚಾರಧಾರೆಯ ಸೆಳೆತ ಅವರನ್ನು ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಮಾತ್ರ ಹೇಳಿದರೆ ಅಷ್ಟೇನೂ ಸಮಂಜಸ ಆಗದೇನೋ. ಅದಕ್ಕೂ ಇದೆ ಒಂದು ಬಲವಾದ ಕಾರಣ !
ಇವತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಂತಾದವರು ಭಾಗೀರಥಿ ಅವರ ಆಯ್ಕೆಯನ್ನು ಪಕ್ಷದ ಹಲವು ವೇದಿಕೆಯಲ್ಲಿ ಬೆಂಬಲಿಸಿ, ಭಾಗೀರಥಿ ಅವರ ಪಕ್ಷ ನಿಷ್ಟೆ ಹಾಗೂ ಸೇವೆಯನ್ನು ಉದಾಹರಣೆಯಾಗಿ ನೀಡುತ್ತಾರೆ. ಇನ್ನೊಬ್ಬರಿಗೆ ಉದಾಹರಣೆಯಾಗಿ ಆಕೆ ಬೆಳೆದಳಲ್ಲ, ಅದರ ಹಿಂದೆ ಇದೆ, ಆಕೆಯ ಮತ್ತು ಆಕೆಯ ಇಡೀ ಕುಟುಂಬದ ಕಣ್ಣೀರ ಕಥೆ !
ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ದಲಿತ ಸಮುದಾಯದಲ್ಲಿ ಆದಿದ್ರಾವಿಡ ಸಮುದಾಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಸಮುದಾಯವಾಗಿದ್ದು, ರಾಜಕೀಯ ಸ್ಥಾನಮಾನದ ವಿಚಾರದಲ್ಲಿ ಅಷ್ಟೇ ಹಿಂದೆ ಉಳಿದಿದೆ. ಸಮುದಾಯದವರ ಒಗ್ಗಟ್ಟಿನ ಕೊರತೆ ಇದಕ್ಕೆ ಮೇಲ್ನೋಟಕ್ಕೆ ಕಾರಣವಾಗಿದ್ದರೂ ಮೇಲ್ವರ್ಗದ ಜತೆ ಹೋರಾಡಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆರಲು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಪ್ರಮುಖ ಕಾರಣಗಳು.


ಹರ್ಘರ್ ತಿರಂಗಾ ಕುಟುಂಬದೊಂದಿಗೆ ಭಾಗೀರಥಿ ಮುರುಳ್ಯ