Home » ಬಿಟ್ ಕಾಯಿನ್ ತನಿಖೆ ನಡೆದರೆ ಮುಖ್ಯಮಂತ್ರಿ ಬೊಮ್ಮಾಯಿ ಖಂಡಿತ ಬಲಿ ಎಂದ ಪ್ರಿಯಾಂಕ್ ಖರ್ಗೆ | ಸಿಎಂ ಗೆ ಎದುರಾಯ್ತಾ ಬಿಟ್ ಕಾಯಿನ್ ಟೆನ್ಷನ್ ??

ಬಿಟ್ ಕಾಯಿನ್ ತನಿಖೆ ನಡೆದರೆ ಮುಖ್ಯಮಂತ್ರಿ ಬೊಮ್ಮಾಯಿ ಖಂಡಿತ ಬಲಿ ಎಂದ ಪ್ರಿಯಾಂಕ್ ಖರ್ಗೆ | ಸಿಎಂ ಗೆ ಎದುರಾಯ್ತಾ ಬಿಟ್ ಕಾಯಿನ್ ಟೆನ್ಷನ್ ??

0 comments

ಕಲಬುರ್ಗಿ: ಬೊಮ್ಮಾಯಿ ಹೈ ಕಮಾಂಡ್ ನಾಯಕರನ್ನು ಭೇಟಿಯಗಲು ಹೊರಟಿರುವುದು ಬಿಟ್ ಕಾಯಿನ್ ಬಗ್ಗೆ ಮಾತುಕತೆಗೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಅವರ ಮಕ್ಕಳು ನೇರವಾಗಿ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದು,ಸಿ.ಎಂ ಗೆ ಬಿಟ್ ಕಾಯಿನ್ ಟೆನ್ಷನ್ ಹೆಚ್ಚಾಗಿದೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ,ಒಂದು ವೇಳೆ ಇದರ ತನಿಖೆ ನಡೆದರೆ ಕರ್ನಾಟಕದ ಮುಖ್ಯಮಂತ್ರಿಯನ್ನು ಖಂಡಿತವಾಗಿಯೂ ಬಲಿ ತೆಗೆದುಕೊಳ್ಳಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಟ್ ಕಾಯಿನ್ ಕರೆನ್ಸಿ ಸೇರಿದಂತೆ ಹಲವು ಅಕ್ರಮ ದಂಧೆಗಳು ಬಿಂದಾಸ್ ಆಗಿ ನಡೆಯುತ್ತಿದೆ. ಇದರಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಈಗಾಗಲೇ ಆಗಿದೆ. ಅಧಿಕಾರಿಗಳು ಹಾಗೂ ಪ್ರಭಾವಿ ನಾಯಕ ಬೆಂಬಲದೊಂದಿಗೆ ಈ ಹಗರಣ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಕೆ ನಡೆಸಿದರೆ, ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ತಿಳಿಯುತ್ತದೆ. 10 ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿದರೆ, ಹಗರಣ ಸಂಪೂರ್ಣವಾಗಿ ಹೊರ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

You may also like

Leave a Comment