Home » Elephant Attack: ಆನೆ ತುಳಿದು ಸಾವನ್ನಪ್ಪಿದ ವ್ಯಕ್ತಿಗೆ ನೀಡಿದ ಪರಿಹಾರವನ್ನು ತಿರಸ್ಕರಿಸಿದ ಫ್ಯಾಮಿಲಿ

Elephant Attack: ಆನೆ ತುಳಿದು ಸಾವನ್ನಪ್ಪಿದ ವ್ಯಕ್ತಿಗೆ ನೀಡಿದ ಪರಿಹಾರವನ್ನು ತಿರಸ್ಕರಿಸಿದ ಫ್ಯಾಮಿಲಿ

1 comment
Elephant Attack

 

ಕೇರಳ ಪದಮಲದ ಅಜೀತ್ ಎಂಬುವವನನ್ನು ಬೇಲೂರಿನ ಮಖ್ನಾ ಕಾಡಾನೆ ತುಳಿದು ಸಾಯಿಸಿದ್ದಕ್ಕೆ , ಅವರ ಕುಟುಂಬದವರಿಗೆ ಕೇಂದ್ರ 15 ಲಕ್ಷ ಪರಿಹಾರವನ್ನು ಘೋಷಣೆ ಮಾಡಿತ್ತು. ಆದ್ರೆ ಅವರ ಕುಟುಂಬದವರು ಆ ಪರಿಹಾರವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: Actress Anupama Parameswaran: ನನಗೆ ಒಂದು ಗಿಫ್ಟ್ ಕೊಟ್ಟರೆ ನಾನು ನಿಮ್ಮವಳಾಗುತ್ತೇನೆ ಎಂದ ಅನುಪಮಾ!!

ವಯನಾಡು: ಮಖ್ನಾ ಕಾಡಾನೆ ತುಳಿದು ಸಾವನ್ನಪ್ಪಿದ ಕೇರಳದ ಅಜೀತ್ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಿದರೂ ಅದನ್ನ ಅವರ ಕುಟುಂಬ ನಿರಾಕರಿಸಿದೆ.

ಯಾವಾಗ ವಿಧಾನ ಸಭೆಯಲ್ಲಿ ಪರಿಹಾರದ ಬಗ್ಗೆ ಬಿಜೆಪಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿತೂ. ಈ ಕಾರಣಕ್ಕಾಗಿಯೇ ನಾವು ಪರಿಹಾರವನ್ನು ತಿರಸ್ಕರಿಸಿದ್ದೇವೆ ಎಂದು ಅವರ ಕುಟುಂಬ ಹೇಳಿದೆ.

ಫೆ. 10 ನೆಯ ತಾರೀಕು ರಾಜ್ಯ ಸರ್ಕಾರ ರೇಡಿಯೋ ಕಾಲರ್ ಹಾಕಿದ್ದ ಆನೆಯು ಅಜೀತ್ ಅನ್ನು ತುಳಿದು ಸಾಯಿಸಿತ್ತು. ಈ ಕಾರಣದಿಂದಲೇ ಸರಕಾರ ಮೃತನ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಿತ್ತು.

ರಾಹುಲ್ ಗಾಂಧಿ ಸ್ವತಃ ಕುಟುಂಬದ ಜೊತೆ ಮಾತನಾಡಿದ್ದರು. ಇದರ ಬೆನ್ನಲ್ಲೇ 15 ಲಕ್ಷ ಪರಿಹಾರ ಘೋಷಣೆ ಮಾಡಿರುವುದರಿಂದ ಬಿಜೆಪಿಯವರು ಲೇವಡಿ ಮಾಡಿದ್ದರಿಂದ ಕುಟುಂಬವು ಪರಿಹಾರವನ್ನು ಪಡೆಯಲು ತಿರಸ್ಕರಿಸಿದೆ.

ನಂತರ ಸಚಿವ ಈಶ್ವರ್ ಖಂಡ್ರೆ 15 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಫೋನ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದಾರೆ. ವಯನಾಡು ಸಂಸದರಾದ ರಾಹುಲ್ ಗಾಂಧಿ ಕುಟುಂಬವನ್ನು ಸಮಾಧಾನ ಮಾಡಿದ್ದರು ಎಂದು ಹೇಳಲಾಗಿದೆ.

You may also like

Leave a Comment