Home » Karnataka Election: ನನಗೆ ಯಾವುದೇ ಬೇಡಿಕೆ ಇಲ್ಲ-ಕುಮಾರಸ್ವಾಮಿ ಹೊಸ ಹೇಳಿಕೆ

Karnataka Election: ನನಗೆ ಯಾವುದೇ ಬೇಡಿಕೆ ಇಲ್ಲ-ಕುಮಾರಸ್ವಾಮಿ ಹೊಸ ಹೇಳಿಕೆ

0 comments

HD Kumaraswamy: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೇನು ಕೆಲವು ಗಂಟೆಗಳು ಬಾಕಿ ಇದ್ದು, ಎಲ್ಲರ ಗಮನ ಫಲಿತಾಂಶದ ಮೇಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, 2,615 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸದ್ಯ ನಾಯಕರೆಲ್ಲರೂ ಫಲಿತಾಂಶದ ನಿರೀಕ್ಷೆಯಲಿದ್ದಾರೆ.

ಈ ನಡುವೆ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿದ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸರ್ಕಾರ ರಚನೆಗೆ ಸಂಬಂಧಿಸಿ, ನಮ್ಮದು ಸಣ್ಣ ಪಕ್ಷ, ನನಗೆ ಯಾವುದೇ ಬೇಡಿಕೆ ಇಲ್ಲ; ಸರ್ಕಾರ ರಚನೆ ಹಿನ್ನೆಲೆಯಲ್ಲಿ ನನ್ನನ್ನು ಯಾರೂ ಸಂಪರ್ಕಿಸಿಲ್ಲʼ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಮತ ಎಣಿಕೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ʼಜೆಡಿಎಸ್‌ಗೆ ಸುಮಾರು 30-32 ಸ್ಥಾನಗಳು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಎಂದು ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್‌ಗಳನ್ನು ಉಲ್ಲೇಖಿಸಿ ʼಕೆಲವರು ಹಳೆಯ ಪಕ್ಷಕ್ಕೆ ಬಹುಮತದ ಮುನ್ಸೂಚನೆಯನ್ನು ಸಹ ನೀಡಿದ್ದಾರೆ. ಆದರೆ ಭವಿಷ್ಯವಾಣಿಗಳನ್ನು ನಂಬಲು ಆಗುವುದಿಲ್ಲʼ ಎಂದಿದ್ದಾರೆ. ʼಮುಂದಿನ 2-3 ಗಂಟೆಗಳಲ್ಲಿ ಇದು ಸ್ಪಷ್ಟವಾಗಲಿದೆ. ಎಕ್ಸಿಟ್ ಪೋಲ್‌ಗಳು ಎರಡು ರಾಷ್ಟ್ರೀಯ ಪಕ್ಷಗಳು ಬಹುಮತ ಪಡೆಯಲಿವೆ ಎಂದು ತೋರಿಸುತ್ತವೆ.

ಈಗಾಗಲೇ ಸಮೀಕ್ಷೆಗಳು ಜೆಡಿಎಸ್‌ಗೆ 30-32 ಸ್ಥಾನಗಳನ್ನು ನೀಡಿವೆ. ನಮ್ಮದು ಸಣ್ಣ ಪಕ್ಷ. ನನಗೆ ಯಾವುದೇ ಬೇಡಿಕೆಯಿಲ್ಲ…ಒಳ್ಳೆಯ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದೇನೆʼ ಎಂದು ಅವರು ಹೇಳಿದರು. ಅದಲ್ಲದೆ ʼಇಲ್ಲಿಯವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮೊದಲು ಅಂತಿಮ ಫಲಿತಾಂಶ ಆಧಾರದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ ಎಂದಿದ್ದಾರೆ.

You may also like

Leave a Comment